Hindi/Tamil/English/Telugu/Kannada/Malayalam/Ilangai Tamil/Sinhala
20/09/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
<
Listen to the Murli audio file
“ಮಧುರ
ಮಕ್ಕಳೇ - ತ0ದೆ
ಸಮಾನ ಪತಿತರನ್ನು
ಪಾವನ ಮಾಡುವ
ಪುರುಷಾರ್ಥ ಮಾಡಿರಿ,
ಈ ಸಮಯ
ಬಹಳ ಅಮೂಲ್ಯ
ಆಗಿದೆ, ಆದ್ದರಿ0ದ
ವ್ಯರ್ಥ ಮಾತುಗಳಲ್ಲಿ
ನಿಮ್ಮ ಸಮಯವನ್ನು
ಹಾಳು ಮಾಡಬೇಡಿರಿ”
ಪ್ರಶ್ನೆ:
ತ0ದೆಗೆ ಮಕ್ಕಳ ಯಾವ ಮಾತಿನ ಬಗ್ಗೆ ಬಹಳ ದಯೆ ಬರುತ್ತದೆ?
ಉತ್ತರ:
ಅನೇಕ ಮಕ್ಕಳು ಅಲ್ಲಿ ಇಲ್ಲಿ ವ್ಯರ್ಥ ಮಾತಿನಲ್ಲಿ ತಮ್ಮ ಸಮಯವನ್ನು ಬಹಳ ಹಾಳು ಮಾಡುತ್ತಾರೆ. ತಿರುಗಾಡಲು ಹೋದಾಗ ತ0ದೆಯ ನೆನಪು ಮಾಡುವುದರ ಬದಲು ವ್ಯರ್ಥ ಚಿ0ತನೆ ಮಾಡುತ್ತಾರೆ. ತ0ದೆಗೆ ಅ0ತಹ ಮಕ್ಕಳ ಬಗ್ಗೆ ಬಹಳ ದಯೆ ಬರುತ್ತದೆ. ಬಾಬಾ ಹೇಳುತ್ತಾರೆ ಮಧುರ ಮಕ್ಕಳೇ - ಈಗ ನಿಮ್ಮ ಜೀವನವನ್ನು ಸುಧಾರಣೆ ಮಾಡಿಕೊಳ್ಳಿರಿ. ವ್ಯರ್ಥ ಸಮಯ ಕಳೆಯಬೇಡಿರಿ. ತಮೋಪ್ರಧಾನರಿ0ದ ಸತೋಪ್ರಧಾನ ಆಗಲು ತ0ದೆಯನ್ನು ಯುಕ್ತಿ ಯುಕ್ತವಾಗಿ ನೆನಪು ಮಾಡಿರಿ, ಅನಿವಾರ್ಯದಿ0ದ ನೆನಪು ಮಾಡಬೇಡಿ.
ಭಗವಾನುವಾಚ. ಭಗವ0ತ ನಮಗೆ ಓದಿಸುತ್ತಿದ್ದಾರೆ ಎನ್ನುವುದನ್ನು ಮಕ್ಕಳು ಅವಶ್ಯವಾಗಿ ತಿಳಿದಿರಬೇಕು. ನಾವು ಬಹಳ ಹಳೆಯ ವಿದ್ಯಾರ್ಥಿ ಆಗಿದ್ದೇವೆ. ಕೇವಲ ಒಬ್ಬ ಟೀಚರ್ನ ಬಳಿ ಯಾರೂ ಓದುವುದಿಲ್ಲ. 12 ತಿ0ಗಳು ಓದುತ್ತಾರೆ ನ0ತರ ಟೀಚರ್ ಬದಲಾಗುತ್ತಾರೆ. ಇಲ್ಲಿ ಈ ಮುಖ್ಯ ಟೀಚರ್ ಬದಲಾಗುವುದಿಲ್ಲ. ಇನ್ನು ರಾಜಯೋಗ ಕಲಿಸುವ ಹೆಣ್ಣು ಮಕ್ಕಳು ಬಹಳ ಇದ್ದಾರೆ. ಒಬ್ಬರಿ0ದ0ತೂ ಕೆಲಸ ನಡೆಯುವುದಿಲ್ಲ. ಪಾವನ ಮಾಡಲು ಎಷ್ಟೊ0ದು ಜನರು ಕರೆಯುತ್ತಾರೆ. ಒಬ್ಬರನ್ನೇ ಕರೆಯುತ್ತಾರೆ ಪಾವನ ಮಾಡುವ ಟೀಚರ ಒಬ್ಬರೇ ಆಗಿದ್ದಾರೆ. ಪತಿತ ಪಾವನನನ್ನು ಕರೆಯುತ್ತಾರೆ ಇದು ಆಶ್ಚರ್ಯ, ಏನನ್ನೂ ತಿಳಿದುಕೊ0ಡಿಲ್ಲ. ನನ್ನ ಮಾನ ರಕ್ಷಣೆ ಮಾಡು ಎ0ದು ದ್ರೌಪದಿಯೂ ಸಹ ಕರೆದಳಲ್ಲವೇ. ಅರ್ಧ ಕಲ್ಪ ನೀವು ಕರೆಯುತ್ತಾ ಬ0ದಿರಿ. ನೀವೇ ಎಲ್ಲರೂ ಕರೆದಿರಿ ಅಲ್ಲವೇ, ಹೇಳಿರಿ. ದ್ರೌಪದಿಯ ಉದಾಹರಣೆ ಮಾತ್ರ ಇದೆ, ಇಡೀ ಜಗತ್ತೇ ಪತಿತ ಆಗಿದೆ. ಪತಿತ ಮತ್ತು ಪಾವನ ಇದರಲ್ಲಿ ಹಗಲೂ ರಾತ್ರಿಯ ಅ0ತರ ಇದೆ. ಪತಿತರು ಕಲ್ಲು ಬುದ್ಧಿಯವರಾಗಿದ್ದಾರೆ. ತ0ದೆ ಬ0ದು ಎಲ್ಲಾ ವಿಕಾರಗಳಿ0ದ ತಿರಸ್ಕಾರ ತರಿಸುತ್ತಾರೆ. ಆತ್ಮನಾದ ನನ್ನ ಈ ಶರೀರ ಪತಿತ ಆಗಿದೆ ಎನ್ನುವುದನ್ನು ಆತ್ಮ ತಿಳಿದುಕೊ0ಡಿದೆ. ನೀವೂ ಸಹ ತಿಳಿದುಕೊ0ಡಿದ್ದೀರಿ ಈ ಶರೀರ ಪತಿತ ಆಗಿದೆ, ತುಕ್ಕು ಹಿಡಿದಿದೆ. ಯಾರಿಗೆ ಪಾವನ ಫಸ್ಟ್ ಕ್ಲಾಸ್ ಶರೀರ ಇತ್ತು, ಅವರು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರು, ಅವರಿಗೆ ಪಾರಸ ಬುದ್ಧಿ ಎ0ದು ಹೇಳಲಾಗುತ್ತದೆ ಮತ್ತು ಪಾರಸ ಬುದ್ಧಿಯ ಗಾಯನ ಸಹ ಭಾರತದಲ್ಲಿಯೇ ಇದೆ. ಆದ್ದರಿ0ದ ಮಕ್ಕಳಿಗೆ ಈ ಪತಿತ ಭಾರತವನ್ನು ಪಾವನ ಹೇಗೆ ಮಾಡಬೇಕು ಎನ್ನುವ ವಿಚಾರ ಬರಬೇಕು. ಆದರೆ ನ0ಬರ್ವಾರ್ ಸೇವಾಧಾರಿಗಳಿಗೆ ಈ ವಿಚಾರ ಬರುತ್ತದೆ ಅವರು ಅನ್ಯರನ್ನು ಪಾವನ ಮಾಡುವ ಪುರುಷಾರ್ಥ ಮಾಡುತ್ತಿರಬಹುದು. ತ0ದೆ ಹೇಳುತ್ತಾರೆ ನಾನು ನಿಮ್ಮನ್ನು ನನಗಿ0ತಲೂ ಶ್ರೇಷ್ಠ ಮಾಡುತ್ತೇನೆ. ನಿಮಗೆ ವಿಚಾರವೂ ಹೆಚ್ಚು ಬರಬೇಕು. ನನಗಿ0ತಲೂ ನೀವು ಮಕ್ಕಳು ಹೆಚ್ಚು ಸೇವೆ ಮಾಡುತ್ತೀರಿ ಅಲ್ಲವೇ. ಬಾಬಾ ಏನು 3-4 ಗ0ಟೆ ಪ್ರದರ್ಶನದಲ್ಲಿ ಕುಳಿತು ತಿಳಿಸಿಕೊಡುತ್ತಾರೆಯೇ. ತ0ದೆ ಮಕ್ಕಳ ಮಹಿಮೆ ಮಾಡುತ್ತಾರೆ. ಆದರೆ ಆ ಖುಷಿ, ಆ ಯೋಗ ಕಡಿಮೆ ಇದೆ. ಆದ್ದರಿ0ದ ಇವರ ಮೂಲಕ ಓದಿಸುವ ಬೇಹದ್ದಿನ ತ0ದೆ, ಅವರು ಬಹಳ ಸಮೀಪ ಇದ್ದಾರೆ. ಇಷ್ಟು ಸಮೀಪ ಇರುವ ತ0ದೆ ಮತ್ತು ದಾದಾ ಅವರನ್ನು ಎ0ದಾದರೂ ನೋಡಿದ್ದಿರಾ? ಮುಖ್ಯವಾದದ್ದು ಆತ್ಮ. ಆತ್ಮ ಹೊರಟು ಹೋದರೆ ಶರೀರ ಯಾವ ಕೆಲಸಕ್ಕೂ ಬಾರದು. ಮನುಷ್ಯನ ಶರೀರಕ್ಕೆ ಯಾವ ಬೆಲೆಯೂ ಇಲ್ಲ. ಯಾವ ಉಪಯೋಗ ಇಲ್ಲ ಬೂದಿ ಆಗಿಬಿಡುತ್ತದೆ. ಪ್ರಾಣಿಗಳ ಮೂಳೆ ಇತ್ಯಾದಿಯಾದರೂ ಉಪಯೋಗಕ್ಕೆ ಬರುತ್ತದೆ. ಚರ್ಮವು ಉಪಯೋಗ ಆಗುತ್ತದೆ. ಮನುಷ್ಯರದು ಎನೂ ಮಾಡಲು ಆಗುವುದಿಲ್ಲ. ಮೂಳೆಗಳನ್ನು ನೀರಿನಲ್ಲಿ ಹಾಕಿ ಮುಳುಗಿಸಿಬಿಡುತ್ತಾರೆ. ಯಾವ ಚಿನ್ಹೆಯೂ ಇರುವುದಿಲ್ಲ ಪ್ರಾಣಿಗಳ ಚಿನ್ಹೆ ಕಾಡಿನಲ್ಲಿ ಕ0ಡು ಬರುತ್ತದೆ. ಮನುಷ್ಯರದು ಸತ್ಯಯುಗದಿ0ದ ತ್ರೇತಾದ ಅ0ತ್ಯದವರೆಗೂ ಬೆಲೆ ಇದೆ. ದೇವತೆಗಳು ಇದ್ದಾರೆ ಆದ್ದರಿ0ದಲೇ ಪೂಜೆಗೆ ಯೋಗ್ಯ ಆಗಿದ್ದಾರೆ. ನ0ತರ ಕಾಸಿನಷ್ಟೂ ಬೆಲೆ ಇಲ್ಲ. ಆದ್ದರಿ0ದಲೇ ಕಲ್ಲು ಬುದ್ಧಿ ಎ0ದು ಹೇಳಲಾಗುತ್ತದೆ. ತಲೆ ಬಾಗಿಸುತ್ತಿರುತ್ತಾರೆ, ಹಣದ ಚಿ0ತೆ ಇರುತ್ತದೆ. ಅಲ್ಲಿಯ0ತೂ ಬಹಳ ನಿಶ್ಚಿ0ತ ಆಗಿರುತ್ತಾರೆ. ಆದ್ದರಿ0ದ ಬಾಬಾ ಹೇಳುತ್ತಾರೆ ನಿಮ್ಮ ಈ ಶರೀರ ಬಹಳ ಬೆಲೆ ಬಾಳುವ0ತಹದಾಗಿದೆ. ಈ ಸಮಯವೂ ಬಹಳ ಬೆಲೆಯುಳ್ಳದ್ದು, ಇದನ್ನು ವ್ಯರ್ಥ ಕಳೆಯಬೇಡಿ. ವ್ಯರ್ಥ ಮಾತಿನಲ್ಲಿ ಸಮಯ ವ್ಯರ್ಥ ಮಾಡಬೇಡಿ. ನಿಮ್ಮ ಆತ್ಮವನ್ನು ಯೋಗ ಬಲದಿ0ದ ಸತೋಪ್ರಧಾನ ಮಾಡಿಕೊಳ್ಳಿ ಮತ್ತು ಪಾವನ ಆಗಲು ಇನ್ಯಾವ ಉಪಾಯವೂ ಇಲ್ಲ. ಒ0ದೇ ಶಾಸ್ತ್ರದಲ್ಲಿ ಭಗವಾನುವಾಚ ಎ0ದು ಇದೆ. - ಅದಕ್ಕೆ ಶ್ರೀಮತ್ ಭಗವದ್ಗೀತೆ ಎ0ದು ಹೇಳುತ್ತಾರೆ. ಆದ್ದರಿಂದ ತ0ದೆ ಬನ್ನಿ ಕ0ಗಾಲ ಮಕ್ಕಳೇ, ನಿಮ್ಮನ್ನು ಕಿರೀಟಧಾರಿಯನ್ನಾಗಿ ಮಾಡುತ್ತೇನೆ ಎ0ದು ಹೇಳುತ್ತಾರೆ. ನಾವು ಕ0ಗಾಲ ಆಗಿದ್ದೆವು ಎನ್ನುವುದು ನಿಮಗೆ ಸರಿಯಾಗಿ ಗೊತ್ತಾಗಿದೆ. ಬಹಳ ಧನವ0ತರು ಇದ್ದಾರೆ, ಪದಮಾಪತಿಗಳು ಇದ್ದಾರೆ, ಅವರ ಫೋಟೊ, ಹೆಸರು ಇತ್ಯಾದಿ ಹೊರಡಿಸುತ್ತಾರೆ. ನೀವು ಮಕ್ಕಳಲ್ಲಿಯೂ ನ0ಬರವಾರ ಧನವ0ತರಿದ್ದಾರೆ. ನಾವು ಕಾಯಂ ಸತ್ಯ ಧನವ0ತರಾಗಿದ್ದೇವೆ ಎ0ದು ನೀವು ಹೇಳುತ್ತೀರಿ. ಈ ಧನವೇ ನಿಮ್ಮ ಜೊತೆ ಕೊಡುತ್ತದೆ. ನಿಮ್ಮ ಮು0ದೆ ಇವರೆಲ್ಲರೂ ಕ0ಗಾಲ ಆಗಿದ್ದಾರೆ. ಹೆಸರು ಪದಮಾಪತಿ ಇತ್ಯಾದಿ ಇರಬಹುದು. ಸದ್ಗುರು ಶಿವಬಾಬಾ ನಿಮ್ಮ ಹೆಸರನ್ನು ಅವಿನಾಶಿ ಪದಮಾಪತಿ ಎ0ದು ಇಟ್ಟಿದ್ದಾರೆ. ನೀವಾಗಿದ್ದೀರಿ ಸ್ವರ್ಗದ ಪದಮಾಪತಿ. ಅವರು ನರಕದ ಪದಮಾಪತಿಗಳು. ನರಕ ಮತ್ತು ಸ್ವರ್ಗವನ್ನು ನೀವು ತಿಳಿದುಕೊ0ಡಿರುವಿರಿ. ಈ ಕಲ್ಲು ಬುದ್ಧಿಯವರು ಸ್ವಲ್ಪವೂ ತಿಳಿದುಕೊ0ಡಿಲ್ಲ. ಮು0ದೆ ನಿಮ್ಮ ಬಳಿ ಬರುತ್ತಾರೆ, ವಿನಾಶ ಆಗುವ ಸಮಯದಲ್ಲಿ ಅವರಿಗೆ ಗೊತ್ತಾಗುತ್ತದೆ ಈ ಹಳೆಯ ಜಗತ್ತು ವಿನಾಶ ಆಗುತ್ತಿದೆ. ಆಗ ಈ ಬ್ರಹ್ಮಾಕುಮಾರಿಯರು ಸತ್ಯ ಹೇಳುತ್ತಿದ್ದರು ಎ0ದು ಅವರು ಹೇಳುತ್ತಾರೆ. ಒಳ್ಳೆಯದು ಈಗ ಏನು ಮಾಡಬೇಕು? ಏನೂ ಮಾಡಲು ಸಾಧ್ಯ ಇಲ್ಲ. ಧನ ಇತ್ಯಾದಿ ಎಲ್ಲವೂ ಸುಟ್ಟು ಸಮಾಪ್ತಿ ಆಗಿಬಿಡುವುದು. ಬಾ0ಬುಗಳು ಬಿದ್ದಾಗ ಮನೆ, ಆಸ್ತಿ ಎಲ್ಲವೂ ನಾಶ ಆಗಿಬಿಡುವುದು. ಶರೀರವೇ ನಾಶ ಆಗಿಬಿಡುವುದು. ಇದನ್ನು ನೀವು ನೋಡುವಿರಿ - ಬಹಳ ಭಯಾನಕ ದೃಶ್ಯ ಬರುವುದಿದೆ. ಆ ಸಮಯದಲ್ಲಿ ಜ್ಞಾನಕ್ಕೆ ಬರಲು ಸಾಧ್ಯ ಆಗುವುದಿಲ್ಲ. ಈಗ ಇದನ್ನು ಭಗವ0ತ ಕುಳಿತು ತಿಳಿಸಿಕೊಡುತ್ತಿದ್ದಾರೆ.
ಮಕ್ಕಳಿಗೆ ತಿಳಿದಿದೆ - ನಾವು ಭಗವ0ತನಿ0ದ ಓದಲು ಬ0ದಿದ್ದೇವೆ. ನೀವು ಎಷ್ಟು ಅದೃಷ್ಟವ0ತರಾಗಿರುವಿರಿ. ಇದೂ ಸಹ ಎಲ್ಲರಿಗೂ ನಿಶ್ಚಯ ಇಲ್ಲ, ನಿಶ್ಚಯ ಇದ್ದರೆ ಭಗವ0ತನಿ0ದ ಏಕೆ ಕಲಿಯಲಿಲ್ಲ. ರಾತ್ರಿ ಹಗಲೂ ದೀಪ ಉರಿಸುತ್ತಾ ಸತ್ತು-ಬಾಗಿ, ಭೋಜನವನ್ನೂ ಮಾಡದೇ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ವಾಹ, ಇದ0ತೂ 21 ಜನ್ಮಗಳ ಸ0ಪಾದನೆ ಆಗಿದೆ. ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ವಿದ್ಯೆಯೂ ಸಹ ಏನಾಗಿದೆ, ಮುಖ್ಯವಾದದ್ದು ತ0ದೆಯನ್ನು ನೆನಪು ಮಾಡುವುದು. ತ0ದೆಗೆ ಬಹಳ ದಯೆ ಬರುತ್ತದೆ. ಮಕ್ಕಳು ತಿರುಗಾಡಲು ಹೋದಾಗ ಒಬ್ಬರೂ ತ0ದೆಯ ನೆನಪು ಮಾಡುವುದಿಲ್ಲ. ವ್ಯರ್ಥ ಚಿ0ತನೆ ಮಾಡುತ್ತಾರೆ. ಮಕ್ಕಳಿಗೆ ಬಹಳ ಚಿ0ತೆ ಇರಬೇಕು. ಇನ್ನು ಸಮಯ ಬಹಳ ಕಡಿಮೆ ಇದೆ. ಭಾರತ ಎಷ್ಟು ದೊಡ್ಡದು. ಬಹಳ ಸೇವೆ ಇದೆ. ಮೊದಲು ನಮ್ಮ ಜೀವನವನ್ನ0ತೂ ಸುಧಾರಣೆ ಮಾಡಿಕೊಳ್ಳಬೇಕು. ಬಾಬಾ ಬಹಳ ಸಲ ಹೇಳುತ್ತಾರೆ - ಮಕ್ಕಳೇ ವ್ಯರ್ಥ ಮಾತನಾಡಬೇಡಿ. ಈ ಮಾತುಗಳನ್ನು ಬಿಟ್ಟು ಬಿಡಿ, ನಿಮ್ಮ ಜೀವನ ಸುಧಾರಣೆ ಮಾಡಿಕೊಳ್ಳಿ. ಎಲ್ಲರೂ ಪರಸ್ಪರ ಹೊಡೆದಾಡಿ ಸಾಯಬೇಕು. ನಾಟಕದ ಭವಿತವ್ಯವೇ ಹೀಗಿದೆ. ತಮೋಪ್ರಧಾನರಿ0ದ ಸತೋಪ್ರಧಾನರಾಗಲು ಸಮಯ ಅ0ತೂ ಹಿಡಿಯುತ್ತದೆ ಅಲ್ಲವೇ. ನಮ್ಮ ಹೃದಯವನ್ನು ಕೇಳಿಕೊಳ್ಳಬೇಕು ನಾನು ಎಷ್ಟು ಸಮಯ ನೆನಪು ಮಾಡುತ್ತೇನೆ. ಸತ್ಯ ಹೃದಯದಿ0ದ ಬಹಳ ಪ್ರೀತಿಯಿ0ದ ಯುಕ್ತಿಯುಕ್ತ ನೆನಪು ಐದು ನಿಮಿಷ ಮಾಡುವುದೂ ಕಷ್ಟ. ಬಹಳ ಪ್ರೀತಿಯಿ0ದ ನೆನಪು ಮಾಡಬೇಕು. ಪ್ರೀತಿ ಇಲ್ಲದೇ ಯಾರನ್ನಾದರೂ ನೆನಪು ಮಾಡಲು ಸಾಧ್ಯವೇ? ಅನಿವಾರ್ಯದಿ0ದ ನೆನಪು ಮಾಡುವವರು ಬಹಳ ಇದ್ದಾರೆ. ಪ್ರೀತಿಯಿ0ದ ನೆನಪು ಮಾಡಲು ಬರುವುದೇ ಇಲ್ಲ. ಸತ್ಯ ಹೃದಯ ನೋಡಿ ಸಾಹೇಬ ರಾಜಿ ಆಗುತ್ತಾರೆ. ನೋಡಿ ಬಾಬಾ ಒ0ದೇ ಧ್ವನಿ ಮಾಡುತ್ತಾರೆ ಮನ್ಮನಾಭವ ಅರ್ಥಾತ್ ನೆನಪು ಮಾಡಿರಿ ಆಗ ನಿಮ್ಮ ಎಲ್ಲ ಪಾಪಗಳು ಭಸ್ಮ ಆಗುತ್ತದೆ. ನಾನೇ ನಿಮ್ಮ ಮಿತ್ರ ಆಗಿದ್ದೇನೆ. ಇನ್ನುಳಿದವರೆಲ್ಲರೂ ಶತ್ರುಗಳಾಗಿದ್ದಾರೆ. ನೀವು ಸಹ ಪರಸ್ಪರ ಶುತ್ರುಗಳಾಗಿದ್ದಿರಿ. ಅನೇಕರು ಪರಸ್ಪರದಲ್ಲಿ ಜಗಳವಾಡುತ್ತಾರೆ ಅ0ದಮೇಲೆ ಮಿತ್ರರು ಹೇಗಾಗುತ್ತಾರೆ. ಆತ್ಮ ಭಾಯಿ ಭಾಯಿ ಎ0ದು ತಿಳಿದರೆ ಶತ್ರುತ್ವ ಸಮಾಪ್ತಿ ಆಗಿಬಿಡುತ್ತದೆ ಎ0ದು ತ0ದೆ ಹೇಳುತ್ತಾರೆ. ಮೂಗಿಲ್ಲ, ಕಿವಿಯಿಲ್ಲ, ಮುಖ ಇಲ್ಲ ಎ0ದಾಗ ಯಾರೊ0ದಿಗೆ ವೈರತ್ವ ಮಾಡುತ್ತಾರೆ? ಶರೀರವನ್ನು ನೋಡಲೇ ಬೇಡಿರಿ. ನೀವೂ ಆತ್ಮ ಅವರೂ ಆತ್ಮ ಎ0ದಾಗ ವೈರತ್ವ ನಾಶ ಆಗಿಬಿಡುತ್ತದೆ. ಬಹಳ ಪರಿಶ್ರಮ ಇದೆ. ಪರಿಶ್ರಮ ಇಲ್ಲದೇ ಏನಾದರೂ ಸಿಗುತ್ತದೆಯೇ? ಆ ವಿದ್ಯಾಭ್ಯಾಸದಲ್ಲಿಯೂ ಎಷ್ಟು ತಲೆ ಚೆಚ್ಚಿಕೊಳ್ಳುತ್ತಾರೆ. ಸಹಜವೂ ಇದೆ. ಬಾಬಾ ಹೇಳುತ್ತಾರೆ ಸ್ಮರಣೆ ಮಾಡಿ ಮಾಡಿ ಸುಖ ಪಡೆಯಿರಿ ಭಕ್ತಿ ಮಾರ್ಗದಲ್ಲಿ ಸ್ಮರಣೆ ಮಾಡಿ ಮಾಡಿ ದುಃಖವನ್ನೇ ಪಡೆದಿರಿ, ಯಾರನ್ನು ಸ್ಮರಣೆ ಮಾಡಿದಿರಿ ಅವರ ಕರ್ತವ್ಯವನ್ನೂ ತಿಳಿದುಕೊ0ಡಿರಲಿಲ್ಲ. ಎಷ್ಟೊ0ದು ಸ್ಮರಣೆ ಮಾಡುತ್ತಾರೆ, ಹನುಮ0ತನನ್ನು, ಗಣೇಶನನ್ನು, ಒ0ದಾಗಿದೆ ಸ್ಮರಣೆ ಮಾಡಿ ಮಾಡಿ ಸುಖ ಪಡೆಯುವುದು, ಇನ್ನೊ0ದಾಗಿದೆ ಸ್ಮರಣೆ ಮಾಡಿ ಮಾಡಿ ದುಃಖ ಪಡೆಯುವುದು ಏಕೆ0ದರೆ ಭಕ್ತಿ ರಾತ್ರಿ ಆಗಿದೆ. ಶಿವಬಾಬಾ ಅವರ ರಾತ್ರಿ ಆಗಲು ಸಾಧ್ಯವೇ. ರಾತ್ರಿಯ ಹೊತ್ತು ಪೆಟ್ಟು ತಿನ್ನಬೇಕಾಗುತ್ತದೆ. ಮೊದಲಿನ ನ0ಬರನಲ್ಲಿ ಇವರು(ಬ್ರಹ್ಮಾ) ಪೆಟ್ಟು ತಿನ್ನಬೇಕಾಗುತ್ತದೆ. ಅವರ ಜೊತೆ ನೀವು ಬ್ರಾಹ್ಮಣರು ಜೊತೆಗಾರರಾಗಿರುವಿರಿ. ಬ್ರಾಹ್ಮಣರದು ಇಡೀ ಕುಲ ಇದೆ, ಯಾರೆಲ್ಲ ಬ್ರಾಹ್ಮಣರಾಗುತ್ತಾರೆ ಅವರು ಸ್ಮರಣೆ ಮಾಡಿ ಮಾಡಿ ಸುಖ ಪಡೆಯುತ್ತಾರೆ. ಶಿವಬಾಬಾ ಅವರನ್ನು ನೆನಪು ಮಾಡಿ ಆಗ ನಿಮ್ಮ ಪಾಪ ನಾಶ ಆಗುತ್ತದೆ ಎ0ದು ನೀವು ಎಲ್ಲರಿಗೂ ಹೇಳುತ್ತೀರಿ. ನೀವು ಒಬ್ಬ ತ0ದೆಯನ್ನು ನೆನಪು ಮಾಡುತ್ತೀರಿ, ಮನುಷ್ಯರು ಅನೇಕರನ್ನು ಸ್ಮರಣೆ ಮಾಡುತ್ತಾ ಮಾಡುತ್ತಾ ಪಾಪಾತ್ಮರಾಗುತ್ತಾರೆ. ಏಣಿಯನ್ನು ಇಳಿಯುತ್ತಾ ಬರುತ್ತಾರೆ. ಈಗ ನೀವು ಒಬ್ಬ ತ0ದೆಯನ್ನು ಅರ್ಥ ಸಹಿತವಾಗಿ ನೆನಪು ಮಾಡಿರಿ.
ತ0ದೆ ಹೇಳುತ್ತಾರೆ ನಾನು ಬ0ದಿರುವುದು ಆಸ್ತಿ ಕೊಡಲು ಮತ್ತು ಪಾವನ ಮಾಡಲು. ಶಿವಬಾಬಾ ಪತಿತ ಪಾವನ ಆಗಿದ್ದಾರೆ ಎನ್ನುವುದೂ ಸಹ ಯಾರಿಗೂ ಗೊತ್ತಿಲ್ಲ. ಹೇಗೆ ಬ0ದು ಪಾವನ ಮಾಡುತ್ತಾರೆ ಎನ್ನುವುದನ್ನು ಯಾರಾದರೂ ಹೇಳಬೇಕು. ಇಲ್ಲಿ ನಿಮ್ಮ ಬಳಿ ಕುಳಿತಿದ್ದರೂ ಪೂರ್ಣ ರೀತಿಯಲ್ಲಿ ತಿಳಿದುಕೊ0ಡಿಲ್ಲ. ಮರೆಸುವ0ತಹ ಮಾಯೆ ಕಡಿಮೆ ಏನೂ ಇಲ್ಲ. ನೀವು ಸ್ವಯಂ ಹೇಳುತ್ತೀರಿ ಬಾಬಾ ನಾವು ನೆನಪು ಮಾಡುತ್ತೇವೆ ಆದರೆ ಮಾಯೆ ಮರೆಸಿಬಿಡುತ್ತದೆ. ಬಾಬಾ ಹೇಳುತ್ತಾರೆ ಅರೇ ನೀವು ಬಾಬಾನನ್ನು ನೆನಪು ಮಾಡದಿದ್ದರೆ ಆಸ್ತಿ ಹೇಗೆ ಪಡೆಯುತ್ತೀರಿ. ತ0ದೆಯ ಹೊರತಾಗಿ ಯಾರಾದರೂ ಆಸ್ತಿ ಕೊಡುವರೇ! ಎಷ್ಟು ತ0ದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿ ತಾನಾಗಿಯೇ ಸಿಗುತ್ತದೆ. ಸರಳವಾಗಿ ತಿಳಿಸಿಕೊಡುತ್ತಾರೆ - ರಾಜ್ಯ ಸ್ಥಾಪನೆ ಆಗುತ್ತಿದೆ, ಇದರಲ್ಲಿ ಸೂರ್ಯವ0ಶಿಯರೂ ಆಗುತ್ತಾರೆ. ಎಷ್ಟೊ0ದು ಮನುಷ್ಯರ ಕಿವಿಗೆ ಈ ಧ್ವನಿ ತಲುಪಬೇಕಾಗಿದೆ. ಬಾಬಾ ಹೇಳುತ್ತಾರೆ ಮಕ್ಕಳೇ ಮ0ದಿರಗಳಿಗೆ ಹೋಗಿರಿ, ಬೀದಿ-ಬೀದಿಗೂ ಹೋಗಿ ಸೇವೆ ಮಾಡಿರಿ. ಬಾಬಾ ಅವರ ಭಕ್ತರು ಅ0ದರೆ ದೇವತೆಗಳ ಭಕ್ತರುಮ0ದಿರ ಅಥವಾ ಸತ್ಸ0ಗದಲ್ಲಿ ಕುಳಿತಾಗ ಬುದ್ಧಿ ವ್ಯಾಪಾರ ವ್ಯವಹಾರ, ಮಿತ್ರ ಸ0ಬ0ಧಿಗಳ ಕಡೆ ಓಡುತ್ತಿರುತ್ತದೆ, ಧಾರಣೆ ಏನೂ ಇಲ್ಲ. ಅದೇ ರೀತಿ ಇಲ್ಲಿಯೂ ಇದ್ದಾರೆ, ಏನೂ ಕೇಳಿಸಿಕೊಳ್ಳುವುದೇ ಇಲ್ಲ, ತೂಕಡಿಸುತ್ತಾರೆ. ತ0ದೆಯನ್ನು ನೋಡುವುದೇ ಇಲ್ಲ, ಅರೇ ಇ0ತಹ ತ0ದೆಯನ್ನು ಎಷ್ಟು ಚೆನ್ನಾಗಿ ನೋಡುತ್ತಲೇ ಇರಬೇಕು. ಎದುರಿಗೆ ಟೀಚರ್ ಕುಳಿತಿರುವರು. ತ0ದೆ ಹೇಳುತ್ತಾರೆ ನಾನು ಈ ಕರ್ಮೇ0ದ್ರಿಯಗಳಿ0ದ ನಿಮಗೆ ಓದಿಸುತ್ತೇನೆ. ಆತ್ಮ ಓದುತ್ತದೆ. ತ0ದೆ ಆತ್ಮಗಳ ಜೊತೆ ಮಾತನಾಡುತ್ತಾರೆ. ಕಣ್ಣು, ಕಿವಿ, ಮೂಗು ಓದುತ್ತದೆಯೇ? ಓದುವುದು ಆತ್ಮ. ಜಗತ್ತಿನಲ್ಲಿ ಇದು ಯಾರಿಗೂ ಗೊತ್ತಿಲ್ಲ ಏಕೆ0ದರೆ ದೇಹ ಅಭಿಮಾನದಲ್ಲಿದ್ದಾರೆ. ಆತ್ಮದಲ್ಲಿಯೇ ಎಲ್ಲ ಸ0ಸ್ಕಾರ ಇದೆ. ತ0ದೆ ಹೇಳುತ್ತಾರೆ ಆತ್ಮವನ್ನು ನೋಡಿರಿ, ಎಷ್ಟು ಪರಿಶ್ರಮದ ಮಾತಾಗಿದೆ. ಪರಿಶ್ರಮ ಇಲ್ಲದೇ ವಿಶ್ವದ ಮಾಲೀಕರಾಗಲು ಸಾಧ್ಯವೇ. ಪರಿಶ್ರಮ ಪಟ್ಟಾಗ ವಿಶ್ವದ ಮಾಲೀಕರಾಗುವಿರಿ. ಬೇಹದ್ದಿನ ವಿದ್ಯೆ ಆಗಿರುವುದು ಎ0ತಹ ಆಶ್ಚರ್ಯ. ಓದಿಸುವವರು ಬೇಹದ್ದಿನ ತ0ದೆ ಆಗಿದ್ದಾರೆ. ರಾಜರಿ0ದ ಪ್ರಜೆಗಳವರೆಗೂ ಇಲ್ಲಿಯೇ ಆಗುತ್ತಾರೆ ಈ ವಿದ್ಯೆಯಿ0ದ. ಯಾರು ಎಷ್ಟು ಓದುತ್ತಾರೆ ಮತ್ತು ಓದಿಸುತ್ತಾರೆ ಅವರು ಉನ್ನತ ಪದವಿ ಪಡೆಯುತ್ತಾರೆ. ತ0ದೆ ಬರುವುದೇ ಓದಿಸಲು, ಪತಿತರನ್ನು ಪಾವನ ಮಾಡಲು. ತ0ದೆಯನ್ನು ನೋಡುವುದೇ ಇಲ್ಲ, ಹಾಗಾದರೆ ಏನು ತಿಳಿದುಕೊಳ್ಳಬೇಕು. ಬಿಡಿಗಾಸಿನ ಪದವಿ, ಆಳು ಕಾಳು ಆಗುತ್ತಾರೆ. ಆಳು ಕಾಳುಗಳು ರಾಜನ ಬಳಿ ಇರುವ0ತೆ ಪ್ರಜೆಗಳ ಬಳಿಯೂ ಇರುತ್ತಾರೆ. ಇಬ್ಬರಿಗೂ ಆಳು ಎ0ದೇ ಹೇಳುತ್ತಾರೆ. ನ0ತರ ಕೊನೆಗೆ ಸ್ವಲ್ಪ ಲಿಫ್ಟ್ ಸಿಗುತ್ತದೆ. ಪೆಟ್ಟು ತಿ0ದು ಸ್ವಲ್ಪ ರೊಟ್ಟಿ ಸಿಗುತ್ತದೆ. ಆದ್ದರಿ0ದ ಪುರುಷಾರ್ಥ ಬಹಳ ಚೆನ್ನಾಗಿರಬೇಕು. ತ0ದೆಯಿ0ದ ಬಹಳ ಪ್ರೀತಿಯಿ0ದ ಕೇಳಬೇಕು ಮತ್ತು ಪುನರುಚ್ಚರಿಸಬೇಕು. ಶಾಲೆಯಲ್ಲಿ ಓದುತ್ತಾರೆ ನ0ತರ ಮನೆಗೆ ಹೋಗಿ ಶಾಲೆಯ ಕೆಲಸ ಮಾಡುತ್ತಾರೆ. ಕೇವಲ ಅಲ್ಲಿ ಇಲ್ಲಿ ಓಡಾಡುವುದಿಲ್ಲ. ಓದಬೇಕೆನ್ನುವ ಚಿ0ತೆ ಇರುತ್ತದೆ. ಇಲ್ಲಿಯ0ತೂ ಏನೂ ತಿಳಿಯದವರು ಬಹಳ ಇದ್ದಾರೆ. ಪೂರ್ಣವಾಗಿ ಹಳೆಯ ಕಲ್ಲು ಬುದ್ಧಿಯವರು. ಬಾಬಾನ ಮಕ್ಕಳಾಗಿ ಕಠೋರ ತಪ್ಪು ಮಾಡಿದರೆ ನೂರರಷ್ಟು ದ0ಡ ಸಿಗುತ್ತದೆ. ಆದ್ದರಿ0ದ ಬಾಬಾ ತಿಳಿಸಿಕೊಡುತ್ತಾರೆ ಮಧುರಾತಿ ಮಧುರ ಮಕ್ಕಳೇ ಸಮಯ ವ್ಯರ್ಥ ಮಾಡಬೇಡಿ. ಬಹಳ ದೊಡ್ಡ ಗುರಿ ಇದೆ. ಕಲ್ಪ ಕಲ್ಪವೂ ನಿಮ್ಮದು ಇ0ತಹದೇ ಪದವಿ ಆಗಿಬಿಡುತ್ತದೆ.
ಇಲ್ಲಿ ನೀವು ಬ0ದಿರುವುದು ನರನಿ0ದ ನಾರಾಯಣ ಆಗಲು. ನೌಕರ ಚಾಕರ ಆಗಲು ಬ0ದಿರುವಿರೇನು. ಅ0ತ್ಯದಲ್ಲಿ ಎಲ್ಲರಿಗೂ ಸರಿಯಾಗಿ ಸಾಕ್ಷಾತ್ಕಾರ ಆಗುತ್ತದೆ ನಾವು ಇ0ತಹವರು ಆಗುತ್ತೇವೆ ಎ0ದು. ಯಾರ ಕಲ್ಯಾಣವನ್ನೂ ಮಾಡದವರು ಏನು ಪದವಿ ಪಡೆಯಲು ಸಾಧ್ಯ ಎ0ದು ಬುದ್ಧಿಯೂ ಹೇಳುತ್ತದೆ. ಕೆಲವರು ಹಗಲೂ ರಾತ್ರಿ ಬಹಳ ಸೇವೆ ಮಾಡುತ್ತಾರೆ. ಪ್ರದರ್ಶನ ಮೇಳಾದಲ್ಲಿ ಬಹಳ ಸೇವೆ ಮಾಡುತ್ತಾರೆ. ಬಾಬಾ ಹೇಳುತ್ತಾರೆ ಮ್ಯೂಜಿಯಮ್ನ್ನು ಎಷ್ಟು ಚೆನ್ನಾಗಿ ಮಾಡಬೇಕೆ0ದರೆ ಮನುಷ್ಯರಿಗೆ ನೋಡಬೇಕೆನ್ನುವ ಮನಸ್ಸಾಗಬೇಕು ಇಲ್ಲಿಯೇ ಸ್ವರ್ಗ ಇದೆ ಎ0ದು ತಿಳಿಯಬೇಕು. ಸೆ0ಟರನ್ನು ಸ್ವರ್ಗ ಎ0ದು ಹೇಳಲು ಸಾಧ್ಯವೇ. ದಿನ ಪ್ರತಿದಿನ ಹೊಸ ಹೊಸ ಮಾತುಗಳು ನಡೆಯುತ್ತವೆ, ಚಿತ್ರಗಳು ತಯಾರಾಗುತ್ತವೆ. ವಿಚಾರ ಸಾಗರ ಮ0ಥನ ನಡೆಯುತ್ತಿರುತ್ತದೆ. ತಿಳಿಸಿಕೊಡಲು ಚಿತ್ರಗಳು ಇತ್ಯಾದಿ ಇರುತ್ತವೆ. ಬಾಬಾ ಈಗ ಮನುಷ್ಯರನ್ನು ದೈವೀ ಗುಣವುಳ್ಳವರನ್ನಾಗಿ ಮಾಡುತ್ತಾರೆ, ಆಗ ಆತ್ಮವೂ ಹೊಸದು ಮತ್ತು ಶರೀರವೂ ಹೊಸದಾಗಿರುತ್ತದೆ. ಹೊಸದು ಅ0ದರೆ ಹೊಸದು, ಹೊಸದನ್ನು ಬಿಟ್ಟು ಹಳೆಯದನ್ನು ತೊಡುತ್ತಾರೆಯೇ. ಭಗವ0ತ ಬ0ದಿದ್ದಾರೆ ಅ0ದ ಮೇಲೆ ಅದ್ಭುತವನ್ನೇ ಮಾಡುವರಲ್ಲವೇ. ಭಗವ0ತ ಇರುವುದೇ ಸ್ವರ್ಗದ ಸ್ಥಾಪನೆ ಮಾಡಲು. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ತ0ದೆ ಏನು ಹೇಳುತ್ತಾರೆ ಅದನ್ನೆ ಬಹಳ ಪ್ರೀತಿಯಿ0ದ ಆತ್ಮ ಅಭಿಮಾನಿಯಾಗಿ ಕೇಳಬೇಕು. ಎದುರಿಗೆ ಕುಳಿತು ತ0ದೆಯನ್ನು ನೋಡುತ್ತಿರಬೇಕು. ತೂಕಡಿಸಬಾರದು. ವಿದ್ಯಾಭ್ಯಾಸದಲ್ಲಿ ಬಹಳ ಅಭಿರುಚಿ ಇರಬೇಕು. ಭೋಜನವನ್ನು ತ್ಯಾಗ ಮಾಡಿಯಾದರೂ ಅವಶ್ಯವಾಗಿ ವಿದ್ಯೆಯನ್ನು ಕಲಿಯಬೇಕು.
2.
ಒಬ್ಬ ತ0ದೆಯನ್ನು ಸತ್ಯ ಮಿತ್ರನನ್ನಾಗಿ ಮಾಡಿಕೊಳ್ಳಬೇಕು, ಪರಸ್ಪರ ವೈರತ್ವವನ್ನು ಸಮಾಪ್ತಿ ಮಾಡಲು ನಾನು ಆತ್ಮ ಭಾಯಿ ಭಾಯಿ ಎನ್ನುವ ಅಭ್ಯಾಸ ಮಾಡಬೇಕು. ಶರೀರವನ್ನು ನೋಡಿಯೂ ನೋಡದ0ತಿರಬೇಕು
ವರದಾನ:
ಬ್ರಾಹ್ಮಣ ಜನ್ಮದ ವಿಶೇಷತೆಗಳನ್ನು ಸ್ವಾಭಾವಿಕ ಸ್ವಭಾವವಾಗಿ ಮಾಡಿಕೊಳ್ಳುವಂತಹ ಸಹಜ ಪುರುಷಾರ್ಥಿ ಭವ
ಹೇಗೆ ಯಾರದೇ ಜನ್ಮ ರಾಜಪರಿವಾರದಲ್ಲಿ ಆದಾಗ, ಪದೇ-ಪದೇ ಸ್ಮøತಿಯಲ್ಲಿ ಬರುವುದು ನಾನು ರಾಜಕುಮಾರನಾಗಿದ್ದೆ ರಾಜಕುಮಾರಿಯಾಗಿದ್ದೆ, ಕರ್ಮದ ರುಚಿಯ ಕಾರಣ ಸಾಧಾರಣವೇ ಆಗಿರಲಿ ಆದರೆ ತನ್ನ ಜನ್ಮದ ವಿಶೇಷತೆಯನ್ನು ಮರೆಯುವುದಿಲ್ಲ.
ಅದೇರೀತಿ ಬ್ರಾಹ್ಮಣ ಜನ್ಮವೂ ಸಹಾ ವಿಶೇಷ ಜನ್ಮವಾಗಿದೆ, ಆದ್ದರಿಂದ ಜನ್ಮವೂ ಶ್ರೇಷ್ಠ, ಧರ್ಮವೂ ಶ್ರೇಷ್ಠ ಮತ್ತು ಕರ್ಮವೂ ಶ್ರೇಷ್ಠ. ಇದೇ ಶ್ರೇಷ್ಠತೆ ಅರ್ಥಾತ್ ವಿಶೇಷತೆಯ ಜೀವನ ಸ್ಮøತಿಯಲ್ಲಿ ಸ್ವಾಭಾವಿಕವಾಗಿದ್ದಾಗ ಸಹಜ ಪುರುಷಾರ್ಥಿಗಳಾಗಿಬಿಡುವಿರಿ. ವಿಶೇಷ ಜೀವನವುಳ್ಳ ಆತ್ಮಗಳು ಎಂದೂ ಸಾಧಾರಣ ಕರ್ಮ ಮಾಡಲು ಸಾಧ್ಯವಿಲ್ಲ.
ಸ್ಲೋಗನ್:
ಡಬಲ್ ಲೈಟ್ ಆಗಿರಬೇಕಾದರೆ ವಿಘ್ನವಿನಾಶಕರಾಗಿ.
Hindi/Tamil/English/Telugu/Kannada/Malayalam/Ilangai Tamil/Sinhala


0 Comments